ಪ್ರತಿದಿನ ಬೆಳಗ್ಗೆ
ಕನ್ನಡಿಯೊಳಗೆ ನನ್ನದೆ ದರ್ಶನ
ಹೊರಡುವ ಅವಸರ
ಒಂದಿಷ್ಟು ಕ್ರೀಮುಬಳಿದು
ಲ್ಯಾಕ್ಮೆ ಹಚ್ಚುವಷ್ಟರಲ್ಲಿ
ಸಮಯ ಒಂಬತ್ತು
ಬಿಂದಿ ಇಡುವ ಹೊತ್ತು
ಗಳಿಗೆ ತಟಸ್ಥ ಕೈ
ಬಿಂದಿ ಇಡದೆ
ಮುಗಿಯದು ಸಿಂಗಾರ
ದೊಡ್ಡ ಬಿಂದಿ, ಚಿಕ್ಕ ಬಿಂದಿ
ನಕ್ಷತ್ರ ಬಿಂದಿ, ಉದ್ದ ಬಿಂದಿ
ಚಿತ್ತಚಿತ್ತಾರದ ಬಿಂದಿಗಳ ಕ್ಯೂ
ಯಾವುದಿಡಬೇಕೆನ್ನುವ ದ್ವಂದ್ವ
ಯಾವುದೋ ಒಂದು ಎನುವ
ನಿರ್ಲಿಪ್ತ ಮನ, ಕೊನೆಗೆತ್ತಿ
ಇಟ್ಟದ್ದೆ ದೊಡ್ಡ ಬಿಂದಿ
ಹೆಣ್ತನದ ಸಿಂಬಲ್ಲೆ,
ಗೆಳೆಯರ ಕುಚೋದ್ಯ
ನೆನಪಾಗಿ, ಕಿತ್ತು
ಮತ್ತೊಂದು, ಮಗದೊಂದು
ಮತ್ತೂ ಸ್ಥಾನಪಲ್ಲಟ
ಸ್ತ್ರೀತನದ ಸಂಕೇತವೋ
ದಾಸ್ಯದ ಪ್ರತೀಕವೋ
ಬಂಡೇಳುವ ಮನದ ಪ್ರಶ್ನೆ
ನೊಸಲಿಗಿಡುವ ಬೊಟ್ಟಿಗೇಕೆ
ಇಷ್ಟೆಲ್ಲಾ ವ್ಯಾಖ್ಯೆ
ಛೇ, ಇಂದು ಬಸ್ಸು ಮಿಸ್ಸು
*****
Related Post
ಸಣ್ಣ ಕತೆ
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಗದ್ದೆ
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…
-
ಕತೆಗಾಗಿ ಜತೆ
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…